ಐತಿಹಾಸಿಕ ಕ್ಷೇತ್ರ ರಾವಣಕಿ ಈರಣ್ಣನ ಜಾತ್ರಾ ರಥೋತ್ಸವ ಪ್ರಾಣದೇವರು ಗ್ರಾಮದವರಿಗೆ ಈ ದೇವರ ಮೇಲೆ ಬಾಹಾಳ ನಂಬಿಕೆ

ಐತಿಹಾಸಿಕ ಕ್ಷೇತ್ರ ರಾವಣಕಿ ಈರಣ್ಣನ ಜಾತ್ರಾ ರಥೋತ್ಸವ ಪ್ರಾಣದೇವರು
ಕೊಪ್ಪಳ ಜಿಲ್ಲೆ, ಕುಕನೂರು ತಾಲೂಕು ರಾವಣಕಿ ಗ್ರಾಮದ ಸುಪ್ರಸಿದ್ಧ ಈರಪ್ಪಜ್ಜನ ನಿನ್ನೆ ಶ್ರೀ ರಾಮನವಮಿ ಪ್ರಯುಕ್ತ ವಿಜೃಂಭಣೆಯಿಂದ ನೆರವೇರಿಸಲಾಯಿತು .
ಈ ಜಾತ್ರಾ ಮಹೋತ್ಸವದಲ್ಲಿ ಶ್ರೀಯುತ ಲೋಕಸಭೆ ಸದಸ್ಯರಾದ ರಾಜಶೇಖರವರು ಮತ್ತು ಕುಕನೂರು ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಕುಕನೂರು ತಾಲೂಕಿನ ಮುಖಂಡರಾದ ಶ್ರೀಯುತ ಅಶೋಕ್ ತೋಟಲ್ ಶ್ರೀ ಕಳಕಪ್ಪ ಕಂಬಳಿ ಶ್ರೀ ಅರವಿಂದ್ ಗೌಡ್ರು ಊರಿನ ಪ್ರಮುಖರಾದ ತಮ್ಮಣ್ಣ ರಾವಣಕಿ ಹನುಮಂತ ರಾವಣಕಿ ಸುರೇಶ್ ಮುತ್ತಾಳ ಮತ್ತು ಗ್ರಾಮದ ಇನ್ನೂ ಅನೇಕ ಗುರುಹಿರಿಯರು ಭಾಗವಹಿಸಿ ಈ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಿದರು.
ರಾಜಶೇಖರ್ ಅವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷ ನಡೆಯಲಿರುವ ರಾಮನವಮಿಯಂದು ಈ ತಾಲೂಕಿನ ಗ್ರಾಮದವರಿಗೆ ಈ ದೇವರ ಮೇಲೆ ಬಾಳ ನಂಬಿಕೆ ಇದೆ ಬೇರೆ ರಾಜ್ಯದಿಂದ ನಮ್ಮ ರಾಜ್ಯದ ಚಿತ್ರದುರ್ಗ ತುಮಕೂರ್ ಕೊಪ್ಪಳ ಗಂಗಾವತಿ ಸಿಂಧನೂರ್ ಗದಗ್, ಹುಬ್ಬಳ್ಳಿ ಅಲ್ಲಿಂದ ಆಗಮಿಸಿ ಈ ರಥೋತ್ಸವಕ್ಕೆ ಬಂದಿದ್ದಾರೆ.
ಕಳಕಪ್ಪ ಕಂಬಳಿ ಅವರು ಮಾತನಾಡಿ ಕುಕನೂರು ತಾಲೂಕಿನಲ್ಲಿ ನಡೆಯಲಿರುವ ಈರಪ್ಪಜ್ಜನ ಜಾತ್ರೆಯ ದಿನದಂದು ನೀರಿನ ವ್ಯವಸ್ಥೆ ಅನ್ನಪ್ರಸಾದ ಜನರಿಗೆ ಅನುಕೂಲವಾಗುವ ಅವರುಗಳು ಮತ್ತು ಊರಿನ ಮುಖಂಡರು ಸಮರ್ಪಕವಾಗಿ ಒದಗಿಸಿದರು ಮತ್ತು ಶ್ರೀಯುತ ಅರವಿಂದ್ ಗೌಡ್ರವರು ಜಾತ್ರೆಯ ಪ್ರಯುಕ್ತ ರಾವಣಕಿ ಗ್ರಾಮದಲ್ಲಿ ರಾತ್ರಿ ನಾಟಕವನ್ನು ಉದ್ಘಾಟನಾ ಮಾಡುವ ಮೂಲಕ ಗ್ರಾಮದ ಮುಖಂಡರುಗಳು ಈ ಒಂದು ಅತ್ತಿನ ಜಾತ್ರೆಯನ್ನು ಯಶಸ್ವಿಗೊಳಿಸಿದರು.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



