ಕಾರ್ಮಿಕ ಧ್ವನಿ ವಿಶೇಷ ಸಂಚಿಕೆ: ಯಲಬುರ್ಗಾ ಉಪ ನೋಂದಣಿ ಅಧಿಕಾರಿ ಯಾಸಿನ್ ಮುಲ್ಲಾ ಮೇಲೆ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ. ವರದಿ ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ

ಕಾರ್ಮಿಕ ಧ್ವನಿ ವಿಶೇಷ ಸಂಚಿಕೆ
ಯಲಬುರ್ಗಾ ಉಪ ನೋಂದಣಿ ಅಧಿಕಾರಿ ಯಾಸಿನ್ ಮುಲ್ಲಾ ಮೇಲೆ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ.
ಕೊಪ್ಪಳ : ಜಿಲ್ಲೆಯ ಯಲಬುರ್ಗ ತಾಲೂಕಿನ ಭ್ರಷ್ಟ ಉಪ ನೊಂದಣಾಧಿಕಾರಿ ಯಾಸೀನ್ ಮುಲ್ಲಾ ಭ್ರಷ್ಟಾತೀ ಭ್ರಷ್ಟ ಅಧಿಕಾರಿಯಾಗಿದ್ದು, ಯಲಬುರ್ಗಾದ ಉಪ ನೊಂದಣಿಧಿಕಾರಿಯಾಗಿ ಬಹಳ ವರ್ಷಗಳಿಂದ ಇಲ್ಲಿಯೇ ಬಿಡು ಬಿಟ್ಟಿದ್ದಾನೆ, ನೋಂದಣಿ ಮಾಡಿಸಿಕೊಳ್ಳಲು ಬರುವ ರೈತರು ಹಾಗೂ ಸಾರ್ವಜನಿಕರ ಆಸ್ತಿ ಕರೀದಿದಾರರು, ಈತನ ಭ್ರಷ್ಟ ವರ್ತನೆಯನ್ನು ಕಂಡು ರೋಸಿ ಹೋಗಿದ್ದಾರೆ.


ಯಾವ ಮೇಲಾಧಿಕಾರಿಗೂ ಹೆದರದೆ ದಿನನಿತ್ಯ ಹಗಲು ದರೋಡೆ ದಂಧೆ ಪ್ರಾರಂಭಿಸಿದ್ದಾರೆ.
ವಿಂಡ್ ಪವರ್ ಹಾಗೂ ಸೋಲಾರ್ ಪ್ಲಾಂಟ್ ಹಾಕಲು ಒಂದಕ್ಕೆ ಲಕ್ಷ ಲಕ್ಷ ಪಡೆದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪವು ಕೂಡ ಈತನ ಮೇಲೆ ಇದೆ. ಇಂಥ ಅಧಿಕಾರಿ ವಿರುದ್ಧ ಸೂಕ್ತ ತನಿಖೆ ಮಾಡಿಸಿ ಇಲ್ಲಿಂದ ಕೂಡಲೇ ವರ್ಗಾವಣೆ ಮಾಡಲು ಇಲ್ಲಿನ ರೈತರು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಕೂಡಲೇ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ಪತ್ರಕರ್ತ ವೈ ಬಿ ಜೂಡಿ ಪತ್ರಕರ್ತರಿಗೆ ತಿಳಿಸಿದರು.
ತನ್ನ ಕಾರ್ಯಾಲಯದಲ್ಲಿ ಅರುಣ್ ಎನ್ನುವ ಹೊರಗಿನ ವ್ಯಕ್ತಿಯ ಮೂಲಕ ವಸೂಲಿ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇವರ ಮೇಲಾಧಿಕಾರಿ ಆಯುಕ್ತಕರಾದ ದಯಾನಂದ ಅಪ್ಪಾಜಿಗೌಡರು ಇಂಥ ಭ್ರಷ್ಟ ಅಧಿಕಾರಿಯನ್ನು ಮಟ್ಟ ಹಾಕುತ್ತಾರ! ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಸರಕಾರ ಇದನ್ನು ಮಟ್ಟ ಹಾಕಲು ಮುಂದಾಗುತ್ತಿಲ್ಲ ಯಾಕೆ. ಎನ್ನುವ ಪ್ರಶ್ನೆ ಕಾಡುತ್ತಿದೆ, ಇದೆ ರೀತಿ ಆದರೆ ರೈತರು ಬದುಕುವದು ಹೇಗೆ! ರೈತರ ಜಮೀನು ಸೋಲಾರ್ ಪಾಲು, ಮತ್ತು ವಿಂಡ್ ಪವರ್ ಪಾಲು ಹಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2018ರಲ್ಲಿ ಆದೇಶ ಹೊರಡಿಸಿದ್ದರು ಸೋಲಾರ್ ಮತ್ತು ವಿಂಡ್ ಪ್ಲಾನಿನ ಡೀಡ್ ಗಳನ್ನು ಪ್ರತಿಯೊಂದು ಡೀಡ್ ಅನ್ನು ಇಂಗ್ಲೀಷಿನಲ್ಲಿ ಮಾಡುತ್ತಾ ಇದ್ದಾರೆ ಸರ್ಕಾರ ಆದೇಶ ಮಾಡಿದರು ಗಾಳಿಗೆ ತೂರಿ ಅನುಮಾನ ಆಸ್ಪದ ಕಾಗದಪತ್ರ ವ್ಯವಹಾರಗಳು ದಿನನಿತ್ಯ ನೀಡಿದ್ದೆ ಸೋಲಾರ್ ಮತ್ತು ವಿಂಡ್ ಫ್ಯಾನಿನ ಡೀಡಿನಲ್ಲಿ 30 ರಿಂದ 40 ಪೇಜ್ ಇಂಗ್ಲಿಷ್ ನಲ್ಲಿ ಇದ್ದರೆ ರೈತರಿಗೆ ಓದಲು ಬರುವುದಿಲ್ಲ ಬೇರೊಬ್ಬರಿಗೆ ಓದಲು ಹೇಳಿದರೆ ಇದರ ಬಗ್ಗೆ ಮಾಹಿತಿ ಇಲ್ಲ ಅಂತ ಹೇಳುತ್ತಾರೆ
ಇದೇ ರೀತಿ ಮುಂದುವರೆದರೆ ರೈತರು ಬೀದಿ ಪಾಲಾಗುವುದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಸರ್ಕಾರ ನೀಡಿರುವ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವುದರಿಂದ ಬೆಳಗ್ಗೆ 8:00 ಯಿಂದ ಮಧ್ಯಾಹ್ನ 1:30ರ ವರೆಗೆ ಸರ್ಕಾರಿ ಕೆಲಸ ನಿರ್ವಹಿಸಲು ಆದೇಶ ನೀಡಿದ್ದರು ಸಿಬ್ಬಂದಿಯವರು ಅಧಿಕಾರಿಗಳು ಎಂದಿನಂತೆ 10 ಗಂಟೆಗೆ ಪ್ರಾರಂಭವಾಗುತ್ತದೆ ಇದರ ಬಗ್ಗೆ ಮೇಲಧಿಕಾರಿಗಳು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ವರದಿಗಾರರು ಶಶಿಧರ್ ಹೊಸಮನಿ ಕೊಪ್ಪಳ ಜಿಲ್ಲೆ ಯಲಬುರ್ಗಾ



