Breaking NewsCrimePolitics
Trending

Impact ಕಾರ್ಮಿಕ ಧ್ವನಿ ನ್ಯೂಸ್ ವಿವಾದಾತ್ಮಕ ಹೇಳಿಕೆ ನೀಡಿದ ನಾಜಿಯಾ ಖಾನ್ FIR ದಾಖಲು

ಬೆಳಗಾವಿ ಪಕ್ಕದ ಸುಳೇಭಾವಿಯಲ್ಲಿ ಮುಸ್ಲಿಂರ ವಿರುದ್ಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಸಿಎಂ ಸಿದ್ರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿ ವಿವಾದಾತ್ಮಕ ಹೇಳಿಕೆ ನೀಡಿದ ನಾಜಿಯಾ ಖಾನ್

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಚುಮ್ಮಾ ಚಾಟಿ, ಅಭಿನೇತ್ರಿ, ಮಹಿಳಾ ಪತ್ರಕರ್ತರ ಜೊತೆಗೂ ಚುಮ್ಮಾ ಚಾಟಿ ಮಾಡಿದ್ದಾರೆ ಎಂದು ಹಿಂದೂತ್ವದ ಪ್ರಖರ ವಾಗ್ಮಿ ನಾಜೀಯಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ‌.

ಇಂದು ಬೆಳಗಾವಿ ತಾಲೂಕಿನ ಸುಳೆಬಾವಿ ಗ್ರಾಮದಲ್ಲಿ ಯದ್ದಲಭಾವಿ ಹಟ್ಟಿ ರೋಡ್ ನ ಹುಲಿಯಮ್ಮನ ತೋಟದಲ್ಲಿ ಬಟೆಂಗೆ ತೋ ಕಂಟೆಗೆ ಎಕ್ ಹೈ ತೋ ಸೆಫ್ ಹೈ ಹಿಂದೂ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಮುತ್ತು ನೀಡುತ್ತಾರೆ. ಸಿದ್ದರಾಮಯ್ಯ ನಡೆಯ ಬಗ್ಗೆ ನಾನು ವಿರೋಧಿಸಿದ್ದೇನೆ. ಪಕ್ಷದ ಮಹಿಳಾ ವಕ್ತಾರೆಯರಿಗೆ ಸಿದ್ದರಾಮಯ್ಯನವರು ಮುತ್ತು ನೀಡುತ್ತಾರೆ. ಚಲನಚಿತ್ರ ನಟಿಯರನ್ನು ಕೂಡ ಬಿಡದೆ ಸಿಎಂ ಸಿದ್ದರಾಮಯ್ಯ ಅಪ್ಪಿಕೊಳ್ಳುತ್ತಾರೆ. ಮಹಿಳಾ ಪತ್ರಕರ್ತೆಯರ ಜೊತೆಗೂ ಸಿಎಂ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾರೆ. ನನ್ನ ಬಳಿ ನೊಂದ ಮಹಿಳಾ ಪತ್ರಕರ್ತೆಯರ ಲಿಸ್ಟ್ ಕೂಡ ಇದೆ ಎಂದರು.

28 ವರ್ಷದಿಂದ ಬೆಳಗಾವಿಯಲ್ಲಿ ಹಿಂದೂತ್ವಕ್ಕಾಗಿ ಸನಾತನಿಗಳನ್ನು ಜೋಡಿಸುವ ಕಾರ್ಯ ಆಗುತ್ತಿದೆ. ಭಗವಾನ್ ರಾಮನ ಘೋಷಣೆ ಮೊಳಗುತ್ತಿದ್ದಂತೆ ಹಿಂದೂಗಳು ಜಾಗೃತರಾಗಿದ್ದಾರೆ. ಈಗ ರಾಮನಾಮ ಜಪದ ಜತೆಗೆ ಜಾಗೃತಿ ಆಗಿದೆ. ನಾನು ರಾಮನನ್ನು ನಂಬುತ್ತೇನೆ ಅಲ್ಹಾನನ್ನು ನಂಬುವುದಿಲ್ಲ ಮಾಮಾ ಸತ್ತರೆ ಮಾಮಿಯನ್ನು ಮದುವೆ ಆಗುತ್ತಾರ? ಅಕ್ಕ ತಂಗಿಯನ್ನೂ ಮದುವೆ ಆಗುತ್ತಾರೆ. ತಾಯಿಯನ್ನು ಏಕೆ ಬಿಟ್ಡಿದ್ದೀರಿ?

ಇದೇನಾ ಇಸ್ಲಾಂ ಧರ್ಮ?. ಬಾಂಗ್ಲಾದಲ್ಲಿ ಇಂದು ನಡೆಯುತ್ತಿರುವುದು ಇಲ್ಲಿ ನಡೆಯುವುದಿಲ್ಲ ಎಂದು ಅಂದುಕೊಂಡಿದ್ದೀರಾ. ಜಾಗೃತರಾಗಿ.

ಹಿಂದೂ ಯುವತಿಯರನ್ನು ಹೇಗೆ ಪಟಾಯಿಸವೇಕು ಎಂದು ಅವರು ಮಸಿದಿಯಲ್ಲಿ ಟ್ರೇನಿಂಗ್ ನೀಡುತ್ತಾರೆ. ನೀವು ಸುಮ್ಮನೇ ಇದ್ದರೆ ಹೇಗೆ? ಪ್ರಧಾನಿ ಮೋದಿ‌ ಹಿಂದೂಗಳನ್ನು ಒಂದಾಗಿಸಿದ್ದಾರೆ. ಈಗ ಜಾಗೃತರಾಗದೇ ಇದ್ದರೆ‌ ಭಾರತವೂ ಬಾಂಗ್ಲಾ‌ ಆಗುವುದರಲ್ಲಿ ಸಂದೇಹವಿಲ್ಲ. ಕಾಫಿರರೊಂದಿಗೆ ದೋಸ್ತಿ ಮಾಡುವುದು ಇಸ್ಲಾಂ ವಿರೋಧ ಎಂದು ಅವರ ಧರ್ಮ ಹೇಳುತ್ತದೆ. ಹಾಗಿದ್ದ ಮೇಲೆ ಶಿವನನ್ನು ರಾಮನನ್ನು ನಂಬದವನ ಜತೆಗೆ ನೀವೇಕೆ ದೋಸ್ತಿ ಮಾಡುತ್ತೀರಿ? ಹೆಣ್ಣು ಮಕ್ಕಳೇ‌ ನೀವು ತುಂಡಾಗಿ ಫ್ರಿಜ್ಜಿನಲ್ಲಿ ಇರಬೇಕೆ? ಭದ್ರಕಾಳಿ ರೂಪ ತಾಳಿ ದ್ರೋಹಿಗಳನ್ನು ಕತ್ತರಿಸಬೇಕೋ? ನಿರ್ಧರಿಸಿ. ನಾನು ಸನಾತನಿ. ಮದುವೆ ಆಗುವುದಾದರೆ‌ ಸನಾತನಿಯನ್ನೇ ಆಗುತ್ತೇನೆ. ಇಲ್ಲ ಹೀಗೇ ಇರುವೆ. ಎಲ್ಲೆಂದರಲ್ಲಿ ಲುಂಗಿ ಎತ್ತುವ ಮುಸ್ಲಿಮನನ್ನು ಮದುವೆ ಆಗಿ‌ ತೈಮೂರನನ್ನು ಹುಟ್ಟಿಸುವುದಿಲ್ಲ. ಇದು ನಾಚಿಕೆಗೇಡು ಎಂದರು.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button