State

ಮೆಟ್ರೋ ಪ್ರಯಾಣ ದರ ಹೆಚ್ಚಳದ ನಂತರ ರಾಜ್ಯ ಸರ್ಕಾರ ಹಾಲಿನ ಬೆಲೆಯಲ್ಲೂ ಹೆಚ್ಚಳ ಮಾಡಲಿದ್ದು ಗ್ರಾಹಕರಿಗೆ ಬಿಗ್‌ ಶಾಕ್ ಕೊಡುವುದು ಪಕ್ಕಾ ಆಗಿದೆ.

ಬೆಂಗಳೂರು ಫೆಬ್ರವರಿ 20: ಕರ್ನಾಟಕ ಬಜೆಟ್‌ಗೆ ಮುಹೂರ್ತ ಫಿಕ್ಸ್ ಆಗಿದ್ದು ಮಾರ್ಚ್‌ 7ಕ್ಕೆ ಮಂಡಣೆಯಾಗಲಿದೆ. ಆದರೆ ಬಜೆಟ್ ಬಳಿಕ ರಾಜ್ಯದಲ್ಲಿ ಚಹಾ, ಕಾಫಿ, ಮೊಸರು ಮತ್ತು ಇತರ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ. ಪ್ರತಿ ಲೀಟರ್ ಹಾಲಿನ ಬೆಲೆಯೂ ಏರಿಕೆಯಾಗಲಿದೆ.

ಮೆಟ್ರೋ ಪ್ರಯಾಣ ದರ ಹೆಚ್ಚಳದ ನಂತರ ರಾಜ್ಯ ಸರ್ಕಾರ ಹಾಲಿನ ಬೆಲೆಯಲ್ಲೂ ಹೆಚ್ಚಳ ಮಾಡಲಿದ್ದು ಗ್ರಾಹಕರಿಗೆ ಬಿಗ್‌ ಶಾಕ್ ಕೊಡುವುದು ಪಕ್ಕಾ ಆಗಿದೆ.

ಹೌದು.. ಈಗಾಗಲೇ ಬೆಲೆ ಏರಿಕೆಗಾಗಿ ಹಾಲಿನ ಒಕ್ಕೂಟಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಬಜೆಟ್ ಮಂಡಣೆ ಬಳಿಕ ಇದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡುವ ಲಕ್ಷಣಗಳು ದಟ್ಟವಾಗಿದೆ. ಹೀಗಾಗಿ ಈಗಾಗಲೇ ಬಸ್ ಹಾಗೂ ಮೆಟ್ರೋ ಪ್ರಯಾಣ ದರ ಏರಿಕೆಯಿಂದಾಗಿ ಕಂಗಾಲಾದ ಗ್ರಾಹಕರಿಗೆ ಹಾಲಿನ ಬೆಲೆ ಏರಿಕೆ ದೊಡ್ಡ ಹೊರೆಯಾಗಲಿದೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹೆಚ್ಚಿಸುತ್ತಿರುವ ದೊಡ್ಡ ಬೆಲೆ ಏರಿಕೆ ಇದಾಗಿದೆ. ಇದಕ್ಕೂ ಮೊದಲು 2022ರಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆ ಲೀಟರ್‌ಗೆ 3ರೂ. ಹೆಚ್ಚಳವಾಗಿತ್ತು. 2024ರಲ್ಲಿ ಕೆಎಂಎಫ್ ಹಾಲಿನ ಬೆಲೆ ಪ್ಯಾಕೆಟ್‌ಗೆ 2ರೂ. ಹೆಚ್ಚಳವಾಗಿತ್ತು. ಆದರೆ 2024ರಲ್ಲಿ ಬೆಲೆ ಏರಿಕೆ ಆಗಿಲ್ಲ. ಹೀಗಾಗಿ ಕೆಎಂಎಫ್ ಗೆ ರೈತರು ಹಾಲಿನ ಬೆಲೆ ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದಾರೆ. ಇದರಿಂದಾಗಿ ಹಾಲು ಒಕ್ಕೂಟಗಳು ಹಾಲಿನ ಬೆಲೆ ಲೀಟರ್‌ಗೆ 5 ರೂ. ಹೆಚ್ಚಳ ಮಾಡಲು ಒಪ್ಪಿಗೆ ಸೂಚಿಸುವಂತೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿವೆ.

ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ ಮಾತನಾಡಿ, ರೈತರು ಹಾಲಿನ ಒಂದು ಲೀಟರ್‌ಗೆ 5 ರೂ. ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ. ಅಂತಿಮ ನಿರ್ಧಾರ ಈಗ ಮುಖ್ಯಮಂತ್ರಿಯವರ ಮೇಲಿದೆ. ರಾಜ್ಯ ಬಜೆಟ್ ನಂತರ ಇದು ಜಾರಿಗೆ ಬರಲಿದೆ ಎಂದಿದ್ದಾರೆ.

“ಈ ಹಿಂದೆ ನಾವು ದಿನಕ್ಕೆ 85-89 ಲಕ್ಷ ಲೀಟರ್‌ ಹಾಲನ್ನು ಖರೀದಿಸುತ್ತಿದ್ದೆವು. ಇದು ದಿನಕ್ಕೆ 99 ಲಕ್ಷ ಲೀಟರ್‌ಗಳಿಗೆ ಮತ್ತು ಅದಕ್ಕಿಂತ ಹೆಚ್ಚಾಗಿ ಏರಿದೆ. ಈಗ ನಾವು ದಿನಕ್ಕೆ 79-81 ಲಕ್ಷ ಲೀಟರ್ ಹಾಲು ಪಡೆಯುತ್ತಿದ್ದೇವೆ, ಆದ್ದರಿಂದ ಗ್ರಾಹಕರಿಗೆ ಸರಬರಾಜು ಮಾಡುವ ಹೆಚ್ಚುವರಿ ಹಾಲು ನಿಲ್ಲುತ್ತದೆ” ಎಂದು ಶಿವಸ್ವಾಮಿ ಹೇಳಿದರು. ಕರ್ನಾಟಕದಲ್ಲಿ ಹೆಚ್ಚಿಸಲಾದ ಹಾಲಿನ ಬೆಲೆ ಆನ್‌ಲೈನ್‌ನಲ್ಲಿ ಮಾರಾಟವಾಗುವ ಹಾಲಿನ ಬೆಲೆಗಳನ್ನು ಹೊರತುಪಡಿಸಿ ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿನ ಇತರ ಬ್ರಾಂಡ್‌ಗಳಿಗಿಂತ ಇನ್ನೂ ಕಡಿಮೆಯಿರುತ್ತದೆ ಎಂದು ಹೇಳಿದರು.

ಕೆಎಂಎಫ್ ಈಗ ರೈತ ಸಂಘಗಳು, ಹಾಲು ಸಂಘಗಳು, ನೌಕರರ ಸಂಘಗಳು ಮತ್ತು ಇತರ ಪಾಲುದಾರರೊಂದಿಗೆ ಹೆಚ್ಚಿಸಿದ ಹಾಲಿನ ಬೆಲೆಯ ವೆಚ್ಚ ಹಂಚಿಕೆ ಮಾದರಿಯ ಕುರಿತು ಮಾತುಕತೆ ನಡೆಸುತ್ತಿದೆ.

ಕಾಫಿ ಪುಡಿ ಬೆಲೆಯಲ್ಲೂ ಏರಿಕೆ

ಅಲ್ಲದೆ ಮಾರ್ಚ್ ವೇಳೆಗೆ ಕಾಫಿ ಪುಡಿಯ ಬೆಲೆಯೂ ಹೆಚ್ಚಾಗಲಿದೆ. ಒಂದು ಕೆಜಿಗೆ 200 ರೂ. ಹೆಚ್ಚಿಸುವುದಾಗಿ ಕಾಫಿ ಬ್ರೂವರ್ಸ್ ಅಸೋಸಿಯೇಷನ್ ​​ಘೋಷಿಸಿದೆ. ಇದರಿಂದಾಗಿ ಗ್ರಾಹಕರಿಗೆ ಈ ವರ್ಷ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಈಗಾಗಲೇ ಬಿಎಂಟಿಸಿ ಬಸ್‌ಗಳು ಮತ್ತು ನಮ್ಮ ಮೆಟ್ರೋ ಟಿಕೆಟ್ ದರಗಳನ್ನು ಹೆಚ್ಚಿಸಲಾಗಿದೆ.

ಇಷ್ಟು ಮಾತ್ರವಲ್ಲದೆ ರಾಜ್ಯ ಸರ್ಕಾರ ನೀರಿನ ದರವನ್ನು ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಈ ಬಗ್ಗೆ ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಮ್‌ಗಳು) ಕರ್ನಾಟಕ ವಿದ್ಯುತ್ ಆಯೋಗಕ್ಕೆ ಮನವಿ ಮಾಡಿವೆ, ಮುಂಬರುವ ಹಣಕಾಸು ವರ್ಷಕ್ಕೆ ವಿದ್ಯುತ್ ದರವನ್ನು 67 ಪೈಸೆ ಹೆಚ್ಚಿಸುವಂತೆ ಮನವಿ ಮಾಡಿವೆ.

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button