FeatureState

Labour Card Karnataka ಕಾರ್ಮಿಕ ಇಲಾಖೆ ಇಂದ ಸಿಗುವ ಎಲ್ಲಾ 11 ಸೌಲಭ್ಯಗಳ ವಿವರ ಇಲ್ಲಿದೆ ನೋಡಿ

ರಾಜ್ಯದಲ್ಲಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರ ದಿಂದ ಸಿಗುವ ಸೌಲಭ್ಯಗಳು

ಪ್ರತಿ ತಿಂಗಳು ಫಲಾನುಭವಿಗೆ ರೂ 3000/-ಗಳನ್ನು ಪಿಂಚಣಿ ರೂಪದಲ್ಲಿ ನೇರವಾಗಿ Bank Account ಗೆ ಜಮಾ ಮಾಡುತ್ತಾರೆ ಜೀವಿತ ಅವಧಿ ಇರುವ ವರೆಗೆ.

  • ಕಾರ್ಮಿಕ ಕಾರ್ಡ್ ಇರುವ ಪ್ರತಿ ನೋಂದಾಯಿತ ಕಟ್ಟಡ ಅಥವಾ ಇತರೆ ನಿರ್ಮಾಣ ಕಾರ್ಮಿಕ ಫಲಾನುಭವಿಯು 60 ವರ್ಷ ವಯೋಮಿತಿ ಪೂರ್ಣಗೊಂಡಿರಬೇಕು.
  • ಕಾರ್ಮಿಕ ಕಾರ್ಡ್ ಇರುವ ನೋಂದಾಯಿತ ಕಟ್ಟಡ ಕಾರ್ಮಿಕ  60 ವರ್ಷ ವಯಸ್ಸು ಪೂರ್ಣಗೊಳ್ಳುವ ಪೂರ್ವದಲ್ಲಿ ಕನಿಷ್ಠ 03 ವರ್ಷಗಳು ನಿರಂತರವಾಗಿ ಮಂಡಳಿಯ ಫಲಾನುಭವಿಯಾಗಿ ಮುಂದುವರೆದಿರಬೇಕು.
  • ಪಿಂಚಣಿ ಪಡೆಯುವ ಕಾರ್ಮಿಕ ಮೃತರಾದರೆ ಕಾರ್ಮಿಕರ ಪತಿಗೆ ಅಥವಾ ಪತ್ನಿಗೆ ಪಿಂಚಣಿ ಸೌಲಭ್ಯ ಸಿಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಮತ್ತು ಅರ್ಜಿಯೊಂದಿಗೆ ಸಲ್ಲಿಸಲು ಬೇಕಾಗುವ ದಾಖಲೆಗಳು.
  • ಕಾರ್ಮಿಕ ಮಂಡಳಿಯಿಂದ ನೀಡಲಾದ  ಮೂಲ  ಗುರುತಿನ  ಚೀಟಿ ಇರಬೇಕು.
  • ಕಾರ್ಮಿಕನ ಉದ್ಯೋಗದ ದೃಢೀಕರಣ ಪತ್ರ ಕೊಡಬೇಕು.
  • ಕಾರ್ಮಿಕನು ಜೀವಂತ ಇರುವ ಬಗ್ಗೆ ಜೀವಿತ ಪ್ರಮಾಣ ಪತ್ರ ಕೊಡಬೇಕು.
  • ಕಾರ್ಮಿಕನ ಅಥವಾ ಫಲಾನುಭವಿಯ Bank Pass Book ಜೆರೊಕ್ಸ್ ಪ್ರತಿ ಕೊಡಬೇಕು
  • ಪಾಸ್ ಪೋರ್ಟ್ ಅಳತೆಯ Photo ಕೊಡಬೇಕು.
  • ಅರ್ಜಿಯೊಂದಿಗೆ ಸಲ್ಲಿಸಲು ಬೇಕಾಗುವ ದಾಖಲೆಗಳು.
  • ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ.
  • ಪಿಂಚಣಿ ಪಡೆಯುವ ಕಾರ್ಮಿಕ ಮೃತರಾದರೆ ಪತ್ನಿ ಅಥವಾ ಪತಿ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ದಾಖಲೆಗಳು.

ಕಾರ್ಮಿಕ ಇಲಾಖೆ ಇಂದ ಸಿಗುವ ಎಲ್ಲಾ ಸೌಲಭ್ಯಗಳ ವಿವರ ಇಲ್ಲಿದೆ ನೋಡಿ

  1. ಕಾರ್ಮಿಕರಿಗೆ ಪ್ರತಿ ತಿಂಗಳು ರೂ 3000/- ಪಿಂಚಣಿ ಸಿಗುತ್ತದೆ.
  2. ಕಾರ್ಮಿಕ ಕಾರ್ಡ್ ಇಂದ ಅಪಘಾತ ಪರಿಹಾರ 2 ಲಕ್ಷ ರೂ ಗಳ ಪರಿಹಾರ ಸಹಾಯಧನ ಸಿಗುತ್ತದೆ.
  3. ಕಾರ್ಮಿಕ ಕಾರ್ಡ್ ಇಂದ ವೈದ್ಯಕೀಯ ಸಹಾಯಧನ ಪ್ರತಿ ದಿನಕ್ಕೆ 300 ರೂ ನಂತೆ ಗರಿಷ್ಠ ರೂ.20,000/- ಸಹಾಯಧನ ಸಿಗುತ್ತದೆ.
  4. ಕಾರ್ಮಿಕ ಕಾರ್ಡ್ ಇಂದ “ತಾಯಿ ಮಗು ಸಹಾಯ ಹಸ್ತ” ರೂ.6000/- ಗಳು ಆಗಿರುತ್ತದೆ ಪ್ರತಿ ತಿಂಗಳು 500/- ರೂ.ಗಳಂತೆ ನೋಂದಾಯಿತ ಮಹಿಳಾ ಫಲಾನುಭವಿಗೆ ಸಹಾಯಧನ ಸಿಗುತ್ತದೆ.
  5. ಹೆರಿಗೆ ಸೌಲಭ್ಯ “ತಾಯಿ ಲಕ್ಷ್ಮೀ ಬಾಂಡ್” ನೋಂದಾಯಿತ ಮಹಿಳಾ ಕಾರ್ಮಿಕರ ಗಂಡು ಅಥವಾ ಹೆಣ್ಣು ಮಗುವಿನ ಜನನಕ್ಕೆ ರೂ.50,000/- ಮಗುವಿನ ಹೆರಿಗೆಗೆ ನೀಡುವ ಸಹಾಯ ಧನ ಮೊದಲ ಎರಡು ಹೆರಿಗೆಗೆ ಸಹಾಯಧನ ಸಿಗುತ್ತದೆ.
  6. ಮದುವೆ ಸಹಾಯ ಧನ “ಗೃಹ ಲಕ್ಷ್ಮೀ ಬಾಂಡ್” ಕಾರ್ಮಿಕರ ಮೊದಲ ಮದುವೆಗೆ ಅಥವಾ ಕಾರ್ಮಿಕರ ಅವಲಂಭಿತರ ಮದುವೆಗೆ ನೀಡುವ ಸಹಾಯ ಧನ ರೂ.60,000/- ಸಿಗುತ್ತದೆ.
  7. ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ “ಕಾರ್ಮಿಕ ಚಿಕಿತ್ಸಾ ಭಾಗ್ಯ” ಕಾರ್ಮಿಕರಗೆ ಹಾಗು ಕಾರ್ಮಿಕರ ಅವಲಂಭಿತರ ಪ್ರಮುಖ ಖಾಯಿಲೆಗಳ ವೆಚ್ಚಕ್ಕಾಗಿ ಗರಿಷ್ಠ ರೂ.2 ಲಕ್ಷಗಳವರೆ ಹಣ ಮಂಜೂರು ಮಾಡುತ್ತಾರೆ.
  8. ಕಟ್ಟಡ ಕಾರ್ಮಿಕನ ಮಗ ಅಥವಾ ಮಗಳ ಶಿಕ್ಷಣದ ನೆರವಿಗಾಗಿ “ಶೈಕ್ಷಣಿಕ ಧನಸಹಾಯ” Scholarship ಸಿಗುತ್ತದೆ. ಎಷ್ಟು ಹಣ ಸಿಗುತ್ತದೆ ಅಂತ ಕೆಳಗೆ ಮಾಹಿತಿ ಇದೆ ನೋಡಿ.
  9. ನೋಂದಾಯಿತ ಕಾರ್ಮಿಕ ಅಥವಾ ಕಾರ್ಮಿಕಳಿಗೆ ನಿರ್ಮಾಣ ಕೆಲಸದ ಸಮಯದಲ್ಲಾದ ಅಪಘಾತದಿಂದ ಅಥವಾ ಯಾವುದಾದರೂ ಖಾಯಿಲೆಯಿಂದ ಭಾಗಶಃ ದುರ್ಬಲತೆಗೆ ಒಳಗಾದಾಗ ಅವರಿಗೆ ಸರ್ಕಾರದ ಅಧಿಸೂಚನೆಯಂತೆ ರೂ.2000/-ಗಳನ್ನು ದುರ್ಬಲತೆ ಪಿಂಚಣಿ ಸಿಗುತ್ತದೆ.  ರೂ.2 ಲಕ್ಷದ ಗರಿಷ್ಟ  ಮೊತ್ತ ಕಾರ್ಮಿಕ ಶೇಡಾವಾರು ದುರ್ಬಲತೆಗೆ ಅನುಗುಣವಾಗಿ ದುರ್ಬಲರಿಗೆ ಪರಿಹಾರ ಸಹಾಯಧನ ಸಿಗುತ್ತದೆ.
  10. ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ಮರಣಕ್ಕೀಡಾದಾಗ ನೋಂದಾಯಿತ ಕಟ್ಟಡ ಕಾರ್ಮಿಕನ ಅಂತ್ಯಕ್ರಿಯೆ ವೆಚ್ಚವನ್ನು ಭರಿಸಲು ರೂ.4000/-ಗಳನ್ನು ಹಾಗೂ ಮರಣದಿಂದ ಕುಟುಂಬದಲ್ಲಿ ಆಗುವ ಆರ್ಥಿಕ ಸಂಕಷ್ಟವನ್ನು ಎದುರಿಸಲು ಅನುಗ್ರಹ ರಾಶಿಯೆಂದು ರೂ.71,000/-ಗಳನ್ನು ನಾಮನಿರ್ದೇಶಿತನಿಗೆ ಮಂಜೂರು ಮಾಡುತ್ತದೆ.
  11. ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮನೆಯಿಂದ ಕೆಲಸದ ಸ್ಥಳಕ್ಕೆ ತೆರಳಲು ಪ್ರಯಾಣಿಸಲು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸಿಗುತ್ತದೆ.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಇಲ್ಲಿ Click ಮಾಡಿ ಇಲಾಖೆಯ Website Open ಆಗುತ್ತದೆ.
Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Karmik Dhwani

Tousif M Mulla National President Public Rights Cell international Humanity Rights & Media Organization KARMIKDHWANI INDIAN NEWS VOICE OF LABOUR Founder President And Chief Editor Karnataka Human Rights Panel Belagavi District Vice President Karnataka Human Rights Awareness Forum Mumbai Karnataka President 99 India News Belagavi District Reporter Flash24x7News Founder President Indian News Voice Of Nation Chief Editor For Any Kind Of Advertisment Or News Do Contact On This Number: 9686981286

Related Articles

Back to top button